3 weeks ago • Public Star Kannada

ಜನವರಿ 31ಕ್ಕೆ"ರಾಜ ರಾಣಿ " ರಿಲೀಸ್ 

ರಣಧೀರ ನಾಯಕರಾಗಿ ನಟಿಸುವ ಜೊತೆಗೆ ನಿರ್ದೇಶನ ಮಾಡಿರುವ ರಾಜ ರಾಣಿ’ ಸಿನಿಮಾ ಇದೇ ತಿಂಗಳು 31ಕ್ಕೆ ತೆರೆಗೆ ಬರಲಿದೆ. 

ಇದೊಂದು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಆಗಿದ್ದು  ವಿಜಯ್‌ ಬಳ್ಳಾರಿ ಹಾಗೂ ನೇತ್ರಾವತಿ ಮಲ್ಲೇಶ್‌ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇವರೊಂದಿಗೆ ಮಧುಸೂಧನ್‌, ಲೀಲಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ 

ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಆದಾಗಲೇ ಬಿಡುಗಡೆ ಆಗಿದ್ದು ವೀಕ್ಷಕರ ಮೆಚ್ಚುಗೆ ಗಳಿಸಿದೆ.

ಇನ್ನೂ ವಿಶೇಷವೆಂದರೆ ಚಿತ್ರದ ಒಂದು ಹಾಡಿನಲ್ಲಿ ಲೂಸ್‌ ಮಾದ ಯೋಗಿ ಕೂಡಾ ಕಾಣಿಸಿಕೊಂಡಿದ್ದಾರೆ.  “ತಳ ತಳ, ಎಲ್ಲಾ ಕಡೆ ನಿನ್ನ ಹಾಡೇ, ತುಂಬೋಗಿರೆ ನಾಡು ನಾಡೇ, ಏನಿಟ್ಟರೇ ನಿನ್ನ ಕಡೆ, ನಿತ್ಯಾ ಜನ ನಿನ್ನಾ ಎಡೆ..’ ಹಾಡಿನಲ್ಲಿ ಯೋಗಿ ಸ್ಟೆಪ್ ಹಾಕಿದ್ದಾರೆ.

ನಿರ್ದೇಶಕ ಕಂ ನಾಯಕ ರಣಧೀರ್‌ ಈ ಹಿಂದೆ ಪುದಿಯವರುಗಳ್‌’ ತಮಿಳು ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಕನ್ನಡದಲ್ಲಿಯೂ ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದು "ರಾಜ ರಾಣಿ " ಚಿತ್ರದ ಕಥೆ, ಚಿತ್ರಕಥೆ ಸಹ ಇವರೇ ಬರೆದಿದ್ದಾರೆ.
ಮಂಡ್ಯ ಮೂಲದ ರಿತನ್ಯಾ ಶೆಟ್ಟಿ ಚಿತ್ರದ ನಾಯಕಿಯಾಗಿದ್ದರೆ ಇನ್ನೊಬ್ಬ ನಾಯಕನಾಗಿ ಜೀವನ್‌ ಕಾಣಿಸಿಕೊಂಡಿದ್ದಾರೆ.

 ಉಳಿದಂತೆ ಗಿರಿಜಾ ಲೋಕೇಶ್‌, ಶೋಭರಾಜ್, ಬಿರಾದಾರ್‌, ಕಿಲ್ಲರ್‌ ವೆಂಕಟೇಶ, ಚಂದ್ರಪ್ರಭ
, ಗಿರೀಶ್ ಜತ್ತಿ, ಮಂಜುಳಾ ನಾಯ್ಡು, ಭಾಗ್ಯಶ್ರೀ, ಮಲ್ಲೇಶ್. ಎಂ. ಪ್ರದೀಪ್ ಅವಳಿ, ಪ್ರಶಾಂತ್ ಅವಳಿ, ಉಮೇಶ್ ಪುಂಗ, ಅರುಣ್ ಆಚಾರ್ಯ, ಸುಧನ್ ಪ್ರಕಾಶ್, ಚಂದ್ರು.R
ಮುಂತಾದವರು ನಟಿಸಿದ್ದಾರೆ. ಸುಧನ್‌ ಪ್ರಕಾಶ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ 
4 ಹಾಡುಗಳು 4 ಫೈಟ್ ಇದೆ.

ಬೆಂಗಳೂರು, ಮಾಲೂರು, ಕೋಲಾರ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ, ಮೈಸೂರು ಊಟಿ,ನಂದಿ ಬೆಟ್ಟ ಇತರೆಡೆಗಳಲ್ಲಿ  84 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆದಿದೆ.

ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಕಂ ನಾಯಕ ರಣಧೀರ ಇದೇ ತಿಂಗಳು ಜನವರಿ 31ರಂದು ನಮ್ಮ ಚಿತ್ರ ಬಿಡುಗಡೆ ಆಗಲಿದೆ ದಯಮಾಡಿ ಎಲ್ಲರೂ ಬಂದು ಚಿತ್ರವನ್ನು ನೋಡಿ ನಮ್ಮನ್ನು ಪ್ರೋತ್ಸಾಹಿಸಿ ಮತ್ತು ಆಶೀರ್ವದಿಸಬೇಕೆಂದು  ಮನವಿ ಮಾಡಿದರು. 

3 months ago • Public Star Kannada

3 months ago (edited) • Public Star Kannada

ಸ್ಟ್ರಾಂಗ್ ಕಂಟೆಂಟ್ ಇಟ್ಕೊಂಡು  ಬೂಮ್ ಆಗಿ ಬರ್ತಿರೋ ಬಿಟಿಎಸ್... ಇದು ಕೊರಿಯನ್ ಬಿಟಿಎಸ್ ಅಲ್ಲ ನಮ್ ಕನ್ನಡದ ಬಿಟಿಎಸ್  #bts 

5 months ago • Public Star Kannada

youtube Link :   https://youtu.be/WDqn2dGRtig?si=v3EvO... 

Ganapathi Bappa Song 
2words 6000 Views 
Do watch & Share to all God  Ganesha lover's 

Urs : Supreeth Gandhara ( Music Composer & playback singer  ) 

 #SupreethGandhara 
 #SupreethGandharaSongs  
 #supreethgandharaofficial   #supreethgandharadbosssongs   #SupreethGandharainterview   #SupreethGandharaMusicComposer   #SupreethGandharamusic 
 #SupreethGandharaSinger 

5 months ago • Public Star Kannada

PSYCH DESIGN ಗುರು🤯
ನಾಡಿನ ಜನತೆಗೆ "ಗೌರಿ - ಗಣೇಶ" ಹಬ್ಬದ ಶುಭಾಶಯಗಳು.✨

ಪ್ರಜ್ವಲ್ ದೇವರಾಜ್‌ ನಟನೆಯ 
 #ರಾಕ್ಷಸ  ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ.🥰

 #Rakshasa 
 #PrajwalDevaraj 
@prajwaldevaraj
@lohithhmanu @Ravishgowdas
@jebinjacob_dp 
@Ravichandran
@vinodhStuntchoreographer
@udaytmixing

 #Rakshasa   #RakshasaMovie   #prajwalDevaraj   #DynamicPrince   #horrormovie   #kannadamovie   #sandalwood 
 #TheDevilReturns 
 #SatanRises   #HellOnEarth 
 #TheDarkLord 
 #LuciferRising   #BiblicalHorror #SupernaturalThriller   #Demonology   #Possession   #HorrorMovie 
 #TheDevilYouKnow 
 #SoulSacrifice 
 #Apocalypse 
 #EndTimes 
 #GoodVsEvil   #HeavenAndHell   #FaithAndFear  
 #yadavstudios 

6 months ago • Public Star Kannada

ಪ್ರಜ್ವಲ್ ದೇವರಾಜ್ ನಟನೆಯ 'ಮಮ್ಮಿ' ಖ್ಯಾತಿಯ ಲೋಹಿತ್ ನಿರ್ದೇಶನದ 'ರಾಕ್ಷಸ' ಸಿನಿಮಾದ ಟೀಸರ್ ರಿಲೀಸ್ ಆಗಿದೆ. 

8 months ago • Public Star Kannada

9 months ago • Public Star Kannada

9 months ago • Public Star Kannada

Ragini ❤️🔥🔥🔥 

9 months ago • Public Star Kannada

ಚಂದನವನಕ್ಕೆ ಖಡಕ್ ವಿಲನ್ ಎಂಟ್ರಿ

       ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನ ಅರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ದೆಹಲಿ ಮೂಲದ ಭರತ್‌ಚುಗ್ ಸೇರ್ಪಡೆಯಾಗುತ್ತಾರೆ. ಪ್ರಖ್ಯಾತ ಉದ್ಯಮಿಯಾಗಿ ಯಶಸ್ಸು ಕಂಡು, ಈಗ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ಯ ಹೊಸ ಸಿನಿಮಾ ’ಬಿಲ್ಲಿ’ದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ದೃಢಕಾಯ ಶರೀರ, ಬೆಂಕಿ ಉಗುಳುವ ಕಣ್ಣುಗಳು ಹಾಗೂ ತನ್ನದೆ ವಿಭಿನ್ನ ಅಭಿನಯದಿಂದ ಪೋಸ್ಟರ್‌ದಲ್ಲಿ ಗಮನ ಸೆಳೆದಿದ್ದಾರೆ. ಇನ್ನು ’ಬಿಲ್ಲಿ’ ಚಿತ್ರದಲ್ಲಿ ಡಾನ್ ಪಾತ್ರದಲ್ಲಿ ಮಿಂಚಿದ್ದಾರೆ.
 
      ಗಣಿದೇವ್‌ಕಾರ್ಕಳ ಕಥೆ,ಚಿತ್ರಕಥೆ ಬರೆದು ಸಂಗೀತ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ತಾರಾಗಣದಲ್ಲಿ ಅರ್ಜುನ್‌ಶೋರ್ಯ, ಕಾಂತಾರ ಖ್ಯಾತಿಯ ಸತೀಶ್‌ಪೆರ್ಡೂರ್, ಪ್ರಭಾಕರ್‌ಕುಂದರ್, ವಿಕ್ರಾಂತ್‌ರೋಣ ಖ್ಯಾತಿಯ ರಮೇಶ್‌ರೈ ಕುಕ್ಕುವಳ್ಳಿ, ಸಂದೀಪ್ ಮಲಾನಿ ಸೇರಿದಂತೆ ಹಲವು ದೊಡ್ಡ ಕಲಾವಿದರು ಇರುವುದು ವಿಶೇಷ.  ಭೂಗತ ಲೋಕದ ಅಂಶಗಳನ್ನು ಒಳಗೊಂಡಿದ್ದು, ಕರಾವಳಿ ಭಾಗದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೆ ಟೀಸರ್ ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ. ಅಂತೂ ಕನ್ನಡ ಚಿತ್ರರಂಗದಲ್ಲಿ ಭರತ್‌ಚುಗ್ ವಿಲನ್ ಆಗಿ ಹೆಸರು ಮಾಡಲಿ ಎಂಬುದು ಎಲ್ಲರ ಹಾರೈಕೆ.